ಉಪ್ಪರಿಗೆ ಕೆಳಗೆ

ಗೆಳತಿ,
ಅಂದು ಅಮವಾಸ್ಯೆ ಕಳೆದು
ಹುಣ್ಣಿಮೆ ಬರುತ್ತಿತ್ತು
ಹೊಳೆವ ಚಿಕ್ಕಿಗಳ ಮಧ್ಯ
ಚಂದ್ರನ ಹಾಲು ಬೆಳದಿಂಗಳು,
ಹೊಗಳಿ ವಣ್ಣಿಸುತ್ತಿದ್ದೆ-
ಚುಕ್ಕೆ ಚಂದ್ರಮನು,
ಭಾವುಕಳಾಗಿದ್ದೆ,
ಮೈಮರೆತು ನೋಡುತ್ತಿದ್ದೆ.

ಏನು ಹೊಳೆಯಿತೋ ನಿನಗೆ
ಚುಚ್ಚಿ ಎಬ್ಬಿಸಿ ನನ್ನ
ಉಪ್ಪರಿಗೆ ಕೆಳಗಿದ್ದ
ಕಪ್ಪು ಜನಗಳ ತೋರಿದ್ದೆ ನನ್ನ.

ಆಕಾಶದಡಿಯಲ್ಲಿ ಅಂಗಾತ
ಮಲಗಿದ್ದ ನನ್ನಕ್ಕ ತಂಗಿಯರು
ತೊಟ್ಟ ಸೀರೆ-ಕುಪ್ಪಸಗಳಿಗೆ
ನೂರೆಂಟು ತೇಪೆಗಳ
ತೆರೆದು ತೋರಿದೆ ನನ್ನ,
ಕೊರೆವ ಚಳಿ, ಬಿರುಗಾಳಿ
ಬಿರುಸಾಗಿ ಬೀಳುವ
ಮಳೆಯಾಲಿ ಕಲ್ಲುಗಳಿಗೆ
ನಡುಗಿ – ನರಳಾಡಿ
ಉರುಳಿ – ಬೀಳುವ ನನ್ನವರ
ಜೋಪಡಿಯ ಸಾಲುಗಳನ್ನು,
ಊರ ಮುಂದುಗಡೆ
ಉಳ್ಳವರ ದನಗಳಿಗೆ ಮೇವಾಗಿ
ಬೆಳೆದಂಥ ಜನಗಳನು
ದಣಿಯ ಗದ್ದೆಯ ಒಳಗೆ
ದುರಿದು ಹಣ್ಣಾದಂಥ
ಹೂತು ಹೋಗಿರುವಂಥ
ಮೂಳೆಗಳನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಣಾ ನಾವಾಗದಿದೇನೆಲ್ಲದಕು ತಜ್ಞರವಲಂಬನೆಯೊ?
Next post ಯಾಕೆ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys